(Monday, 21 May 2012 13:29)
ಬಣ್ಣದ ಲೋಕದ ಸಹವಾಸವೇ ಬೇಡ ಎಂದು ಬೆನ್ನು ಹಾಕಿರುವ ನಟಿ ಅಮೂಲ್ಯ ಮತ್ತೆ ಬಣ್ಣ ಹಚ್ಚಲಿದ್ದಾರಾ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಕಾರಣ, ಋಷಿ ಎಂಬ ನಿರ್ದೇಶಕರು 'ಹಂಪಿ' ಹೆಸರಿನ ಹೊಸ ಚಿತ್ರವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ. ಅದಕ್ಕೆ ಅಮೂಲ್ಯಾ ನಾಯಕಿ ಎನ್ನಲಾಗುತ್ತಿದೆ. ಬಂದ ಸುದ್ದಿಯ ಪ್ರಕಾರ, 'ಹಂಪಿ' ಎಂಬ ಚಿತ್ರಕ್ಕಾಗಿ ನಿರ್ದೇಶಕ ಋಷಿ ಅಮೂಲ್ಯಾರನ್ನು ಸಂಪರ್ಕಿಸಿದ್ದಾರೆ.
(Monday, 21 May 2012 13:03)
ಇನ್ನೇನು ಗಾಂಧಿನಗರಕ್ಕೆ ಅಡಿಯಿಡಲು ಸಿದ್ಧವಾಗಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಲೇಟೆಸ್ಟ್ ಕಾಂಡೋಮ್ ವಿಡಿಯೋ ಲೋಕಾರ್ಪಣೆಯಾಗಿದೆ. ಸನ್ನಿಯ ಕಾಂಡೋಮ್ ಜಾಹೀರಾತು ಈಗಾಗಲೆ ಅಂತರ್ಜಾಲದಲ್ಲೂ ಅಬ್ಬರಿಸಿ ಬೋಬ್ಬಿರಿದಿದೆ. ಥೈಲ್ಯಾಂಡ್ನಲ್ಲಿ ಚಿತ್ರೀಕರಿಸಿರುವ ಈ ಕಾಂಡೋಮ್ ಜಾಹೀರಾತಿನ ಸ್ಯಾಂಪಲ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಗೆ ಹಾಕಿದ್ದೇ ತಡ ಪಡ್ಡೆಗಳು ಮುಗಿಬಿದ್ದಿದ್ದಾರೆ. "ಮ್ಯಾನ್ಫೋರ್ಸ್ ಕಾಂಡೋಮ್ ಜಾಹೀರಾತು ಚೆನ್ನಾಗಿ ಮೂಡಿಬಂದಿದೆ" ಎಂಬ ಸನ್ನಿ
(Monday, 21 May 2012 12:20)
ರೆಬೆಲ್ ಸ್ಟಾರ್ ಅಂಬರೀಷ್ ಇದೇ ಮೇ 29ಕ್ಕೆ 60ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಅವರ ಅದ್ದೂರಿ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಕೈಜೋಡಿಸಿದೆ. ಹುಟ್ಟುಹಬ್ಬದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಅರಮನೆ ಮೈದಾನದಲ್ಲಿ ಅಂಬಿ ಹುಟ್ಟುಹಬ್ಬ ನಡೆಯಲಿದೆ. ಭಾರತ ಚಿತ್ರರಂಗದ ನಟ-ನಟಿಯರು,ಚಿತ್ರ ನಿರ್ದೇಶಕರು ಸೇರಿದಂತೆ ಚಿತ್ರರಂಗದ ದಿಗ್ಗಜರು ಈ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಂಬಿ ಹುಟ್ಟುಹಬ್ಬ
(Monday, 21 May 2012 12:02)
ಕಳೆದ ವರ್ಷವೇ 'ಪುಲಿಕೇಶಿ' ಎಂಬ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ 'ಭರತ್ ಸರ್ಜಾ' ಎಂಬ ಸರ್ಜಾ ಕುಟುಂಬದ ಮತ್ತೊಂದು ಕುಡಿಯ ಪ್ರವೇಶ ಪಕ್ಕಾ ಆಗಿತ್ತು. ಆದರೆ ನಾಯಕಿ ಆಯ್ಕೆ ಆಗಿರಲಿಲ್ಲ. ಈಗ ಚಿತ್ರೀಕರಣದ ಪ್ರಾರಂಭಿಸಿರುವ ಪುಲಿಕೇಶಿಗೆ ಈಗ ನಾಯಕಿ ಪಕ್ಕಾ ಆಗಿದ್ದಾರೆ. ಅದು ಬೇರಾರೂ ಅಲ್ಲ, 'ಚಿತ್ರ' ಹೆಸರಿನ ಚಿತ್ರದ ಮೂಲಕ
(Monday, 21 May 2012 11:19)
ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಉಪಾಸನಾ ಕಾಮಿನೇನಿ ಮದುವೆ ಜೂನ್ 14ರಂದು ನೆರವೇರಲಿದೆ. ಅವರ ಮದುವೆ ಆಮಂತ್ರಣ ಪತ್ರಿಕೆ ನಮ್ಮ ಒನ್ಇಂಡಿಯಾ ಕಚೇರಿಗೂ ಬಂದು ತಲುಪಿದೆ. ನೀವೀಗ ಫೋಟೋದಲ್ಲಿ ನೋಡುತ್ತಿರುವುದು ಅದೇ ಮದುವೆ ಆಮಂತ್ರಣ ಪತ್ರಿಕೆ. ಟಾಲಿವುಡ್ನಲ್ಲಿ ನಡೆಯುತ್ತಿರುವ ಮತ್ತೊಂದು ಅದ್ದೂರಿ ಮದುವೆ ಇದಾಗಿದೆ. ಅಭಿಮಾನಿಗಳಿಗೆಂದೇ ವಿಶೇಷ ಆರತಕ್ಷತೆ ಕಾರ್ಯಕ್ರಮವನ್ನು ಚಿರಂಜೀವಿ ಕುಟುಂಬ ತಿರುಪತಿಯಲ್ಲಿ
(Monday, 21 May 2012 10:27)
ಇತ್ತೀಚಿಗೆ ಡಬ್ಬಿಂಗ್ ವಿರೋಧಿ ಹೇಳಿಕೆಯನ್ನು ವಿರೋಧಿಸುವವರು ತುಂಬಾ ಕಡಿಮೆಯಾಗಿದ್ದರು. ಅದಕ್ಕೆ ಕಾರಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಣ್ಣಾವ್ರ ಹುಟ್ಟುಹಬ್ಬದಂದು ಡಬ್ಬಿಂಗ್ ವಿರುದ್ಧ ಜೋರಾಗಿ 'ಆವಾಜ್' ಹಾಕಿರುವುದೋ ಏನೋ! ಆದರೆ ಯಾರ ಹೇಳಿಕೆಗೂ ತಮ್ಮ ಅನಿಸಿಕೆಯನ್ನು ಮಾರಿಕೊಳ್ಳದ ಹಿರಿಯ ನಟ ಅನಂತ್ ನಾಗ್ ಮನಬಿಚ್ಚಿ ಮಾತನಾಡಿದ್ದಾರೆ. "ಡಬ್ಬಿಂಗ್ ಯಾಕೆ ಬೇಡ? ಬೇರೆ ಭಾಷೆಗಳಲ್ಲಿ ಅದು ಇರುವಾಗ
(Monday, 21 May 2012 09:48)
ಕನ್ನಡತಿ ಶಿಲ್ಪಾ ಶೆಟ್ಟಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ (ನವೆಂಬರ್ 16ರಂದು) ಹೀಗೇ ಬಾಲಿವುಡ್ ಅಂಗಳದಲ್ಲಿ ಮತ್ತೊಬ್ಬ ತಾರಾ ಜೋಡಿಗೆ ಹೆಣ್ಣು ಮಗುವಾಗಿತ್ತು. ಆ ಮಗುವಿಗೆ 4 ತಿಂಗಳ ನಂತರ (ಮಾರ್ಚ್ 14ರಂದು) ಮಗುವಿನ ತಾತಾ ಅಮಿತಾಬ್ ಬಚ್ಚನ್ ಆರಾಧ್ಯಾ ಎಂಬ ಹೆಸರನ್ನು ಅನಧಿಕೃತವಾಗಿ
(Monday, 21 May 2012 09:33)
ವಾತಾವರಣದಲ್ಲಿ ತಾಪಮಾನ ಏರಿಕೆಯಾದ ಪರಿಣಾಮವೋ ಏನೋ ಬಾಲಿವುಡ್ನಲ್ಲೂ ಹವಾಮಾನ ಬದಲಾದಂತಿದೆ. ಪ್ರೇಕ್ಷಕರನ್ನು ಕೂಲ್ ಮಾಡಲು ಬಾಲಿವುಡ್ ಬೆಡಗಿಯರು ಮತ್ತೆ ಬಿಕಿನಿಗೆ ಶರಣೆಂದಿದ್ದಾರೆ. 'ಪ್ಲೇಯರ್' ಚಿತ್ರಕ್ಕಾಗಿ ಬಿಪಾಶಾ ಬಸು ಬಿಕಿನಿಗೆ ಮೈಸೋತಿದ್ದರು.ಈಗ ಅದೇ ದಾರಿಯಲ್ಲಿ ದೀಪಿಕಾ ಪಡುಕೋಣೆ ಕೂಡ ಹೆಜ್ಜೆ ಹಾಕಿದ್ದಾರೆ. ತಮ್ಮ ಮುಂದಿನ ಚಿತ್ರ 'ಕಾಕ್ಟೈಲ್'ಗಾಗಿ ಬಿಕಿನಿ ತೊಟ್ಟಿದ್ದಾರೆ. ದೀಪಿಕಾ ಮೈಮಾಟ ಬಿಕಿನಿಗೆ ಹೇಳಿಮಾಡಿಸಿದಂತಿದೆ. ಹಾಗಾಗಿಯೇ ಕೆಂಪು
(Monday, 21 May 2012 07:51)
ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ಕನ್ನಡದ 'ಡರ್ಟಿ ಪಿಕ್ಚರ್'ಗೆ ಬರಲು ಸಾಧ್ಯವಾಗುತ್ತಿಲ್ಲ. ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಚಿತ್ರೀಕರಣದಲ್ಲಿ ಮೇ18ರಂದು ವೀಣಾ ಭಾಗಿಯಾಗಬೇಕಿತ್ತು. ಆದರೆ ಆಕೆ ಕರ್ನಾಟಕಕ್ಕೆ ಅಡಿಯಿಡಲು ವೀಸಾ ಸಮಸ್ಯೆ ಅಡ್ಡ ಬಂದಿದೆ. ಕೇವಲ 11 ನಗರಗಳಿಗೆ ಭೇಟಿ ನೀಡಲಷ್ಟೇ ವೀಣಾ ಮಲಿಕ್ಗೆ ಭಾರತ ಸರಕಾರ ವೀಸಾ ಪರವಾನಗಿ ನೀಡಲಾಗಿತ್ತು ಆದರೆ
(Monday, 21 May 2012 07:20)
ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ'ದಲ್ಲಿ ನಟಿಸಬೇಕಾಗಿದ್ದ ಕನ್ನಡ ಮೂಲದ ದಕ್ಷಿಣ ಭಾರತದ ಪ್ರಸಿದ್ಧಿಯ ಪ್ರಕಾಶ್ ರಾಜ್ (ಪ್ರಕಾಶ್ ರೈ), ಈ ಚಿತ್ರದಿಂದ ಹೊರನಡೆದಿದ್ದಾರೆ. ಅವರ ತಾಯಿಯ ಅನಾರೋಗ್ಯ ನಿಮಿತ್ತ ಪ್ರಕಾಶ್ ರಾಜ್ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು
(Monday, 21 May 2012 05:53)
ಕೊನೆಗೂ ಬಚ್ಚನ್ ಕುಟುಂಬದ ಮೊಮ್ಮಗಳ ಹೆಸರು ಆರಾಧ್ಯಾ ಎಂಬುದು ಪಕ್ಕಾ ಆಗಿದೆ. ಹುಟ್ಟಿ ನಾಲ್ಕು ತಿಂಗಳುಗಳ ಬಳಿಕ ಹೆಸರಿಟ್ಟಿದ್ದರೂ, ಅದನ್ನು ಇಲ್ಲಿಯವರೆಗೂ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಬಹಿರಂಗ ಪಡಿಸಿರಲಿಲ್ಲ. ಅಷ್ಟೇ ಅಲ್ಲ, ಸ್ವತಃ ಅಮಿತಾಬ್ ಮೊಮ್ಮಗಳ ಹೆಸರು ಆರಾಧ್ಯಾ ಎಂಬುದನ್ನು ಸಾಕಷ್ಟು ಬಾರಿ ಟ್ಟಿಟ್ಟರ್ ನಲ್ಲೂ ತಳ್ಳಿಹಾಕಿದ್ದರು. ಆದರೀಗ ಟ್ವಿಟ್ಟರಿನಲ್ಲೇ ಒಪ್ಪಿಕೊಂಡಿದ್ದಾರೆ. ನವೆಂಬರ್ 16, 2012
(Monday, 21 May 2012 05:34)
ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚೊಚ್ಚಲ ಮಗುವಿಗೆ (ಗಂಡು ಮಗು) ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಸಹ twitterನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಶಿಲ್ಪಾ
(Monday, 21 May 2012 05:33)
ನಟಿ ನಯನತಾರಾ ಮತ್ತೊಮ್ಮೆ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದೇನಾಯಿತೋ ಏನೋ ಎರಡು ಕೈ ಎತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ. ಇಷ್ಟಕ್ಕೂ ನಯನತಾರಾ ಕೈಕೊಟ್ಟಿರುವುದು ಕಿಚ್ಚ ಸುದೀಪ್ ಚಿತ್ರಕ್ಕೆ. ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರಕ್ಕೆ ನಯನತಾರಾ ನಾಯಕಿ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನೇನು ನಯನತಾರಾ ಸಹಿ ಹಾಕಬೇಕು ಎನ್ನುವ ಹೊತ್ತಿಗೆ
(Sunday, 20 May 2012 12:48)
ಇದು ನಿಜವಾದ ಬ್ರೇಕಿಂಗ್ ನ್ಯೂಸ್..! ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಒಟ್ಟಾಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಚಿತ್ರದ ಹೆಸರು ಅಗ್ರಜ. ದಿ ಇಂಡಿಯನ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಂಕಲನಕಾರ ಟಿ ಗೋವರ್ಧನ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಶ್ರೀ ನಂದನ್ ಎಂಬ ಹೊಸಬರು ಈ ಚಿತ್ರದ ನಿರ್ದೇಶಕರು. ಕಥೆ ಕೇಳಿದ ದರ್ಶನ್ ಹಾಗೂ
(Sunday, 20 May 2012 12:44)
ಈ ಮಧ್ಯೆ ದರ್ಶನ್ ಇದೀಗ ಚಿತ್ರಕರಣದಲ್ಲಿ ತೊಡಗಿಸಿಕೊಂಡಿರುವ ವಿರಾಟ್ ಮುಗಿಬೇಕಿದೆ. ನಂತರ ಅವರದೇ ಬ್ಯಾನರ್ (ಹೋಮ್ ಬ್ಯಾನರ್) ಚಿತ್ರವಾದ ಬುಲ್ ಬುಲ್ ಚಿತ್ರೀಕರಣಕ್ಕೆ ದರ್ಶನ್ ಸಜ್ಜಾಗಬೇಕಿದೆ. ಅಷ್ಟರಲ್ಲಿ ಬಿಡುಗಡೆಗೆ ಸಮೀಪವಿರುವ 'ಸಂಗೊಳ್ಳಿ ರಾಯಣ್ಣ' ಚಿತ್ರದ ಪ್ರಚಾರ ಕಾರ್ಯ ದರ್ಶನ್ ಹೆಗಲೇರಲಿದೆ. ಚಿಂಗಾರಿ ನಂತರ ದರ್ಶನ್ ಅಭಿಮಾನಿಗಳಿ ಸಂಗೊಳ್ಳಿ ರಾಯಣ್ಣನಿಗಾಗಿ ಕಾಯುತ್ತಿದ್ದಾರೆ. ಇನ್ನು ಜಗ್ಗೇಶ್ ಚಿತ್ರಗಳ ಪಟ್ಟಿಯತ್ತ ಕಣ್ಣು
(Sunday, 20 May 2012 11:19)
ಸದ್ಯಕ್ಕೆ ಯೋಗರಾಜ್ ಭಟ್ಟರ 'ಡ್ರಾಮಾ'ದಲ್ಲಿ ಮೂಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸಿಂಧು ಲೋಕನಾಥ್. ಈ ಮೊದಲು, ದಿಗಂತ್ ನಾಯಕತ್ವ ಹಾಗೂ ಭಟ್ಟರ ಶಿಷ್ಯ ಪವನ್ ಕುಮಾರ್ 'ಲೈಫು ಇಷ್ಟೇನೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಜಗತ್ತಿಗೆ ಪರಿಯವಾದ ಸಿಂಧು, ಬಿಚ್ಚಮ್ಮನಾಗಲು ಒಪ್ಪಲಾರೆ ಎಂದ ಬಹಿರಂಗವಾಗಿ ಹೇಳಿದ ನಟಿ. ಈಗಲೂ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು
(Sunday, 20 May 2012 08:29)
ಅಂಬಾರಿ ಸರಳ ಸುಂದರಿ ಮಂಗಳೂರಿನ ಸುಪ್ರೀತಾಗೆ ಅದೇನೋ ಅನ್ಯಾಯವಾಗಿದೆಯಂತೆ. ಅದೇನೋ ಅಂದರೆ ಅದೇನು ಎಂಬುದನ್ನು ಅವರೂ ಹೇಳಿಲ್ಲ. ಏನೂ ಹೇಳದೇ ಸುಮ್ಮನಿರಲು ಅವರಿಂದಲೂ ಸಾಧ್ಯವಾಗಿಲ್ಲ. "ನನ್ನ ನೆಮ್ಮದಿ ಹಾಳಾಗಿದೆ. ಹೆಣ್ಮಕ್ಕಳು ಇಲ್ಲಿ ಬದುಕುವುದು ತುಂಬಾ ಕಷ್ಟ" ಎಂದು ಸುಪ್ರೀತಾ ರವಿ ಮಂಜುನಾಥ್ ನಿರ್ದೇಶನ ಹಾಗೂ ಜಯಂತ್ ನಾಯಕತ್ವದ 'ಕಾವೇರಿ ನಗರ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಗೋಡೆ ಮೇಲೆ
(Sunday, 20 May 2012 07:01)
ಕಠಾರಿವೀರ ಸುರಸುಂದರಾಂಗಿ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಮಠಗಳ ಮುನಿವರ್ಯರು ಈ ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಚಿತ್ರಸಿರುವ ರೀತಿ ಹಾಗೂ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳನ್ನು ಚಿತ್ರದಿಂದ ತೆಗೆದುಹಾಕಿ ಪ್ರದರ್ಶನ ಮುಂದುವರಿಸುವಂತೆ ಹೇರುತ್ತಿರುವ ಒತ್ತಡ ಹಾಗೇ ಮುಂದುವರಿದಿದೆ. ಚಿತ್ರದ ಪ್ರದರ್ಶನವೂ ಮುಂದುವರಿದಿದೆ. ಚಿತ್ರದಲ್ಲಿರುವ ಯಾವುದೇ ದೃಶ್ಯಗಳಿಗೆ ಕತ್ತರಿ ಪ್ರಯೋಗದ ಅಗತ್ಯವಿಲ್ಲ ಎಂದು ಕೋರ್ಟ್
(Saturday, 19 May 2012 11:57)
ತಮ್ಮ ಸಂಭಾವನೆಯಲ್ಲಿ ರಮ್ಯಾರನ್ನೂ ಹಿಂದಿಕ್ಕಿದ್ದ ನಟಿ ರಾಗಿಣಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಿತ್ರವೊಂದಕ್ಕೆ ಗೋಲ್ಡನ್ ಗರ್ಲ್ ರಮ್ಯಾ ಸರಿಸುಮಾರು ರು.30 ಲಕ್ಷ ಪಡೆಯುತ್ತಾರೆ (ಈ ಗುಟ್ಟು ನಮ್ಮ ನಿಮ್ಮಲ್ಲೇ ಇರಲಿ) ಎಂಬ ಮಾತು ಚಾಲ್ತಿಯಲ್ಲಿದೆ. ಸ್ಯಾಂಡಲ್ವುಡ್ನಲ್ಲಿ ರಮ್ಯಾ ಸಂಭಾವನೆಯೇ ಅತಿ ಹೆಚ್ಚು ಎನ್ನಲಾಗಿತ್ತು. ಆದರೆ "ತುಪ್ಪಾ ಬೇಕಾ ತುಪ್ಪಾ" ಎಂದು ತಮ್ಮ ಸೊಂಟವನ್ನು
(Saturday, 19 May 2012 10:04)
ಹೇಗೆ ಏನು ಎಂಬುದನ್ನೆಲ್ಲ ಹೇಳುವುದಿಲ್ಲ ಚಂದ್ರು. ಆದರೆ ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ದೇಶಿಸಲು ಅವಕಾಶ ಸಿಕ್ಕಿರುವುದರಿಂದ ಆತ ತುಂಬಾ ಉತ್ಸಾಹದಲ್ಲಿದ್ದಾರೆ. ರಘು ಮುಖರ್ಜಿ ಅಭಿನಯಿಸಿರುವ 'ಸವಾರಿ' ಸಿನಿಮಾಕ್ಕೂ ಈ ಸಿನಿಮಾಕ್ಕೂ ಯಾವುದೇ ಹೋಲಿಕೆ ಇಲ್ಲ. ಜೊತೆಗೆ ಆ 'ಸವಾರಿ'ಯ ಮುಂದುವರಿದ ಭಾಗ ಕೂಡ ಇದಲ್ಲ ಅನ್ನೋದು ಅವರ ಖಚಿತ ನುಡಿ.ಬನಶಂಕರಿ ಎರಡನೇ ಹಂತದ ಧರ್ಮಗಿರಿ ದೇವಸ್ಥಾನದಲ್ಲಿ ತಮ್ಮ